Saturday, November 29, 2008

ಭಯೋತ್ಪಾದನೆಯ ಭಯದಲ್ಲಿ ಭಾರತ

ನವೆಂಬರ್ ೨೬, ಭಯೋತ್ಪಾದಕರ ಅಟ್ಟಹಾಸಕ್ಕೆ ಮತ್ತೊಮ್ಮೆ ಗುರಿಯಾಗಿದೆ ವಾಣಿಜ್ಯ ನಗರಿ. ಉಗ್ರರು ಮುಂಬೈ ನಗರದ ಹನ್ನೊಂದು ಪ್ರಮುಖ ಪ್ರದೇಶಗಳಲ್ಲಿ ಕಂಡ ಕಂಡವರ ಮೇಲೆ ಗುಂಡಿನ ಸುರಿಮಳೆಗೈದು ಅಸಂಖ್ಯಾತ ಜನರನ್ನು ಕೊಂದಿದ್ದು , ಮೂರು ಪ್ರಮುಖ ಹೋಟೆಲ್ ಗಳಿಗೆ ನುಗ್ಗಿ ಅಲ್ಲಿನ ಜನರನ್ನು ಬಂಧಿಯಾಗಿರಿಸಿಕೊಂಡಿದ್ದು ಈಗ ಇತಿಹಾಸ.

ಇದು ಈ ವರ್ಷದಲ್ಲಿ ಆದ ಮೊದಲ ಭಯೋತ್ಪಾದನೆಯ ಘಟನೆಯಲ್ಲ. ಸತತ ಹನ್ನೊಂದನೇ ಬಾರಿ ನಡೆಯುತ್ತಿರುವ ಮನ ಕಲಕುವ ಕೃತ್ಯ.
೧. ಜನವರಿ ೨೦೦೮ ರಲ್ಲಿ ರಾಮಪುರದಲ್ಲಿ ಸಿಆರ್ ಪಿಎಫ್ ಕೇಂದ್ರದ ಮೇಲೆ ಉಗ್ರರ ದಾಳಿ. ಎಂಟು ಮಂದಿ ಬಲಿ.
೨. ಮೇ ೧೩ ರಂದು ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟ , ೬೮ ಜನರ ದಾರುಣ ಸಾವು.
೩. ಜೂನ್ ೨೫ ರಂದು ಬೆಂಗಳೂರಿನಲ್ಲಿ ಕಡಿಮೆ ಸಾಮರ್ಥ್ಯದ ಬಾಂಬ್ ಸ್ಪೋಟ , ಒಬ್ಬನ ಬಲಿ.
೪. ಜುಲೈ ೨೬ , ಅಹಮದಾಬಾದ್ನಲ್ಲಿ ಕೇವಲ ಎರಡು ಘಂಟೆ ಅವಧಿಯಲ್ಲಿ ೨೦ ಬಾಂಬ್ ಸ್ಪೋಟ. ೫೦ ಬಲಿ.
೫. ಸೆಪ್ಟೆಂಬರ್ ೧೩ , ಹೊಸದಿಲ್ಲಿಯಲ್ಲಿ ನಗರದ ೬ ಕಡೆ ಸ್ಪೋಟ, ೨೬ ಬಲಿ.
೬. ಸೆಪ್ಟೆಂಬರ್ ೨೭, ಹೊಸದಿಲ್ಲಿಯಲ್ಲಿ ಮೆಹರೌಲಿ ಮಾರುಕಟ್ಟೆಯಲ್ಲಿ ಕಚ್ಚ ಬಾಂಬ್ ಸ್ಪೋಟ, ೩ ಬಲಿ.
೭. ಸೆಪ್ಟೆಂಬರ್ ೨೯, ಗುಜರಾತ್ ನ ಮೊದಸದಲ್ಲಿ ಮಸೀದಿ ಬಳಿ ಮೋಟರ್ ಸೈಕಲ್ ನಲ್ಲಿ ಬಂದ ಉಗ್ರನಿಂದ ಬಾಂಬ್ ಸ್ಪೋಟ ಒಂದು ಸಾವು, ಅನೇಕರಿಗೆ ಗಾಯ.
೮. ಸೆಪ್ಟೆಂಬರ್ ೨೯,ಮಹಾರಾಷ್ಟ್ರದ ಮಾಲೆಗಾಂವ್ ನ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ ೫ ಬಲಿ
೯. ಅಕ್ಟೋಬರ್ ೨೧, ಇಂಫಾಲ್ ನಲ್ಲಿ ಮಣಿಪುರ ಪೋಲಿಸ್ ಕಮಾಂಡೋ ಕಾಂಪ್ಲೆಕ್ಷ ಬಲಿ ಶಕ್ತಿಶಾಲಿ ಬಾಂಬ್ ಸ್ಪೋಟಕ್ಕೆ ೧೭ ಬಲಿ.
೧೦. ಅಕ್ಟೋಬರ್ ೩೦, ಅಸ್ಸಾಂನಲ್ಲಿ ೧೮ ಕಡೆ ಬಾಂಬ್ ಸ್ಪೋಟಗೊಂದು ೭೭ ಬಲಿ, ನೂರಾರು ಮಂದಿಗೆ ಗಾಯ.
೧೧. ಈಗ ನವೆಂಬರ್ ೨೬ ರಂದು ಮುಂಬೈ ನಗರದ ಒಬೆರೋಯ್,ತಾಜ್ ಪಂಚತಾರಾ ಹೋಟೆಲ್ , ಸಿ ಎಸ್ ಟಿ ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆ ಉಗ್ರರ ಗುಂಡಿನ ದಾಳಿ, ೨೦೦ ಕ್ಕೂ ಹೆಚ್ಚಿನ ಜನರ ಸಾವು, ಸಾವಿರಾರು ಮಂದಿ ಗಾಯಾಳು.

ಇಂಥಹ ಘಟನೆಗಳು ನಡೆದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳ ಸುರಿಮಳೆಗಳೇ ಎದ್ದೆಳುತ್ತವೆ . ಇದು ಹೇಗಾಯ್ತು ?,ಯಾರ ಕೈವಾಡ ? ನಾವೆಷ್ಟು ಸುರಕ್ಷಿತರು? .....

ಇವೆಲ್ಲವುದರ ಜೊತೆಗೆ ನಾವು ನಮ್ಮನೊಂದು ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಅದೇನೆಂದರೆ ಇವೆಲ್ಲ ನಿಲ್ಲುವುದೆಂತು ?
ನನ್ನ ಪ್ರಕಾರ ಎಲ್ಲಿಯವರೆಗೆ ಜನರು ಜಾಗೃತರಾಗಿ ಭಯೋತ್ಪಾದನೆಯ ನಿವಾರಣೆಗೆ ಕಾರ್ಯಪ್ರವೃತ್ತ ರಾಗುವುದಿಲ್ಲವೋ, ಎಲ್ಲಿಯವರೆಗೆ "ಜನಸೇವಕರು" ಎಂದು ಮೆರೆಯುವ ರಾಜಕೀಯ ಪುಡಾರಿಗಳು ಇನ್ನೊಂದು ಪಕ್ಷದ ಮೇಲೆ ಕೆಸರೆರಚುವುದನ್ನು ಬಿಟ್ಟು ಭಯೋತ್ಪಾನೆಯ ನಿಗ್ರಹಕ್ಕೆ ಶಿಸ್ತಿನ ಕ್ರಮಗಳನ್ನು ಕೈಗೊಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಘಟನೆಗಳು ಮರುಕಳಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಹಾಗಾದರೆ ನಾವು ಎಡವಿದ್ದೆಲ್ಲಿ? ಕಾರಣ ಹುಡುಕುತ್ತಾ ಹೋದರೆ ನಮ್ಮ ಕಣ್ಣಿಗೆ ಕಾರಣಗಳ ರಾಶಿಯೇ ರಾಚುತ್ತದೆ.
೧. ಯಾವುದೋ ನಗರಿಯಲ್ಲಿ ಬಾಂಬ್ ಬಿದ್ದರೆ ನಮಗೇನು ಎನ್ನುವ ಜನರ ತಾತ್ಸಾರ ಮನೋಭಾವನೆ
೨. ಕೊಳಕು ರಾಜಕೀಯ. ನಮ್ಮ ದೇಶಕ್ಕಿಂತ ತಮ್ಮ ಪಕ್ಷ ಬಲಪಡಿಸುವುದರಲ್ಲಿ ತೊಡಗಿರುವ ರಾಜಕಾರಣಿಗಳು
೩. ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ , ಎಲ್ಲ ಅಹಿತಕರ ಘಟನೆಗಳು ನಡೆದ ಮೇಲೆ ಎಚ್ಚೆತ್ತುಕೊಳ್ಳುವ ಸರಕಾರ.
೪. ಜವಾಬ್ದಾರಿಯುತ ಹುದ್ದೆಗಳು ಅಸಮರ್ಥರ ಪಾಲಾಗಿರುವುದು.
ಉದಾಹರಣೆಗೆ ಶಿವರಾಜ್ ಪಾಟಿಲ್ ಗೃಹ ಮಂತ್ರಿಯಾಗಿರುವುದು.
೫. ಶಿಥಿಲಗೊಂಡ ಕಾನೂನು ವ್ಯವಸ್ಥೆ . ವರ್ಷಗಟ್ಟಲೆ ನಡೆಯುವ ವಿಚಾರಣೆಗಳು. ಅಪರಾಧ ಸಾಬೀತಾದರೂ ಶಿಕ್ಷೆ ನೀಡದಿರುವುದು.
ಉದಾ : ಪಾರ್ಲಿಮೆಂಟ್ ಮೇಲೆ ಧಾಳಿ ಮಾಡಿದ ಆರೋಪಿ ಆಫ್ಜ್ಹಲ್ ಗೇ ಇನ್ನು ಗಲ್ಲಿಗೆರಿಸದಿರುವುದು,
ಬೆಂಗಳೂರಿನಲ್ಲಿ ಬಂಧಿತನಾದ ಉಗ್ರ ಇಮ್ರಾನ್ಗೆ ಇನ್ನು ಶಿಕ್ಷೆ ಆಗದಿರುವುದು. ..
೬. ದೇಶದ್ರೋಹಿಗಳಿಗೆ ರಾಜಕಾರಣಿಗಳ ಬೆಂಬಲ
ಉದಾ : ಆಫ್ಜ್ಹಾಲ್ ನ ಗಳ್ಳನ್ನು ತಡೆಹಿಡಿದ ಕಾಂಗ್ರೆಸ್ ಸರಕಾರ. ಸಂಜಯ್ ದತ್ತ್ ಗೆ ಬೇಲಾದ ಕೆಲವೇ ತಿಂಗಳಿನಲ್ಲಿ ಅವನಜೊತೆ ಬಂಧಿತ ರಾದ ಎಲ್ಲರಿಗು ಸಿಕ್ಕ ಬೇಲ್.
೭. ಮಾರಕವಾದ ಸಿಮಿಯಂಥ ಸಂಘಟನೆಗಳನ್ನು ನಿಷೇಧಿಸದಿರುವುದು.
೮. ಬಲಿಷ್ಠ ಕಾನೂನುಗಳನ್ನು ತರುವಲ್ಲಿ ಅಸಮರ್ಥವಾದ ಸರಕಾರಗಳು.
೯. ಶಿಥಿಲಗೊಂಡ ಬೇಹುಗಾರಿಕಾ ವ್ಯವಸ್ಥೆ ಹಾಗು ಗುಪ್ತ ದಳ.
೧೦. ಇವೆಲ್ಲವೂ ನಡೆಯುತ್ತಿರುವುದು ಮೂಲಭೂತವಾದಿಗಳಾದ ಮುಸ್ಲಿಂ ಗಳಿಂದ ಎಂದು ತಿಳಿದಿದ್ದರೂ , ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ, ಕೇವಲ ಮತದ ಆಸೆಗಾಗಿ ಅವರಿಗೆ ಪ್ರಾತಿನಿಧ್ಯ ಸವಲತ್ತುಗಳನ್ನೂ ಕೊಡುತ್ತಿರುವ ಸರಕಾರಗಳು. ನಾನು ಮುಸ್ಲಿಂ ವಿರೋಧಿಯಲ್ಲ . ನಾನು ಒಪ್ಪುತ್ತೇನೆ "ಎಲ್ಲ ಮುಸ್ಲಿಂ ಗಳೂ ಭಯೋತ್ಪಾದಕರಲ್ಲ . ಆದರೆ ಎಲ್ಲ ಭಯೋತ್ಪಾದಕರು ಮುಸ್ಲಿಂ ಗಳು " .

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನು ಅಸಂಖ್ಯಾತ ಕಾರಣಗಳು ನಮ್ಮ ಗಮನಕ್ಕೆ ಬರುತ್ತವೆ.
ಕಾರಣಗಳು ಏನೇ ಆಗಿರಲಿ ನಾವು ನಮ್ಮ ನೂರಾರು ಸಹೋದರ ಸಹೋದರಿಯರನ್ನು ಕಳೆದುಕೊಂಡಿದ್ದೇವೆ. ಈ ಘೋರ ಅಮಾನವೀಯ ಕೃತ್ಯಕ್ಕೆ ನೂರಾರು ಮುಗ್ಧ ಜೀವಗಳು ಬಲಿಯಾಗಿವೆ. ಇಂದು ಹರೀಶ್ ಕರ್ಕರೆ , ಸಾಲ್ಕರ್, ವಿನೋದ್ ಕಾಮ್ಟೆ ಒಳಗೊಂಡಂತೆ ೨೫ ಕ್ಕೂ ಹೆಚ್ಚು ಜನ ಪೋಲಿಸ್ ಅಧಿಕಾರಿಗಳು ವೀರ ಮರಣ ಅಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಬನ್ನಿ ಈ ಘಟನೆಯ ಸಂತಾಪ ಸೂಚಕವಾಗಿ ಈ ಡಿಸೆಂಬರ್ ೧ ರಂದು ಕಪ್ಪು ಬಣ್ಣದ ಪಟ್ಟಿಯನ್ನು ಎಡ ತೋಳಿಗೆ ಕಟ್ಟುವುದರ ಮೂಲಕ ಹುತಾತ್ಮ್ರೆಲ್ಲರಿಗೆ ನಮ್ಮ ಅಂತಿಮ ನಮನ ಸಲ್ಲಿಸೋಣ. ಜೊತೆಗೆ ಭಯೋತ್ಪಾದನೆಯ ವಿರುಧ್ಧದ ಸಮರಕ್ಕೆ ಕಂಕಣ ಬದ್ಧರಾಗೋಣ.

ಎಚ್ಚರಿಕೆ :: ಭಯೋತ್ಪಾದಕರ ಮುಂದಿನ ಗುರಿ ನಾವಾಗಿರಬಹುದು.

"इस घटनाको देखके जिस का खून नही खौला वो खून नही पानी है
जो देश के काम न आए वो बेकार जवानी है "

****** ಜೈ ಹಿಂದ್ ******

3 comments:

ಬಾಲು said...

maga idu india, huttu uchita saavu ugragaamigalinda Kachita!!!!!

nodu, bharata deshada janakke idu enu annisode illa, ela eradu dina ashte, amele ella normal, swalpa dina aadamele ella fine, mera bharat mahan antha dance madthare!! mattello bomb biddaga, matte swalpa gurr annodu ashte. sarvajanika nenapina shakthi bahala kadime kano.

illi yavattu bhayothpadane nillodilla, adu ninthare, adanne nambiruva raaajakeeya pakshagalu, a pakshagalanna nambiruva industrialist galu, pakshagala vote bank, ivelladara madye buddi jeevi galu bere!!!!

ninge annisutta idella nillutte antha?

Anonymous said...

Good Article Arun, This is the First time I am reading your Article. Regarding Terrorism there is one sms saying 'We should be cautious about people who come in our VOTE rather than who come in BOAT'. It says everything.Thanks for sending your article to me.

Unknown said...

hi,abba!estu alavagi think madidiya ninu.ondreeti pratap simhana lekhana iro hage. idu elru yochne madbeku. adre duranta andre nam deshadalli BUDDIJEEVIGALU anta aniskondavrige idra bagge think madoke time iralla, samanya janakke think mado astu BUDDIne iralla. antadralli yaru idna pariharisbeku? vishaya andre idakke karana hudko avashyakatene illa, matte idna nirmoolana madbeku anta chaluvali madodu beda. avaravara samartyakke sariyagi kelasa athava sambala sigohagadre idella mugide hogutte. manushyange bekagirodu ade alwa?
matte, bhaya padovru iddastu dinau bhayotpadakaru idde irtralwa?